ಫೇಸ್ಬುಕ್ನಲ್ಲಿ ಲೈವ್ ಬಂದು ವಿಷ ಕುಡಿದ ಕಾಮಿಡಿಯನ್
ಹಿಂದಿಯ ಖ್ಯಾತ ಕಾಮಿಡಿಯನ್ ಕಪಿಲ್ ಶರ್ಮಾ ಆಪ್ತ ಬಳಗದಲ್ಲಿ ಗುರುತಿಸಿಕೊಂಡರವರು ನಟ ಹಾಗೂ ಕಾಮಿಡಿಯನ್ ತೀರ್ಥಾನಂದ್ ರಾವ್ ‘ಕಾಮಿಡಿ ಸರ್ಕಸ್ ಕೆ ಆಜೂಬೆ’ ಶೋನಲ್ಲಿ ಕಪಿಲ್ ಶರ್ಮಾ ಜೊತೆ ಅವರು ಕೆಲಸ ಮಾಡಿದ್ದ ತೀರ್ಥಾನಂದ್ ರಾವ್ ಇದೀಗ ಫೇಸ್ ಬುಲ್ ಲೈವ್ ಬಂದು ವಿಷ ಕುಡಿದು ಆತ್ಮಹತ್ಯೆಗೆ ಹತ್ನಿಸಿದ್ದಾರೆ.
‘ನನ್ನ ಸಾವಿಗೆ ಆ ಮಹಿಳೆಯೇ ಕಾರಣ’ ಎಂದು ಕಿಡಿಕಾರಿರುವ ತೀರ್ಥಾನಂದ್ ವಿಡಿಯೋ ವೈರಲ್ ಆಗಿದೆ. ತೀರ್ಥಾನಂದ್ ಫೇಸ್ಬುಕ್ ಲೈವ್ ಬಂದಿದ್ದು, ಈ ವೇಳೆ ಅವರು ಲಿವ್-ಇನ್ ರಿಲೇಷನ್ಶಿಪ್ ಬಗ್ಗೆ, ಬ್ಲಾಕ್ಮೇಲ್ ಮಾಡುತ್ತಿರುವ ಬಗ್ಗೆ, ಹಣ ಕಿತ್ತಿರುವ ಬಗ್ಗೆ ಆರೋಪಿಸಿದ್ದಾರೆ. ಈ ಸಂಬಂಧ ದೂರು ದಾಖಲಾಗಿದ್ದು, ಆ ಯುವತಿ ಯಾರು ಎಂಬುದನ್ನು ತೀರ್ಥಾನಂದ್ ರಾವ್ ತಿಳಿಸಿಲ್ಲ.
‘ಮಹಿಳೆಯಿಂದಾಗಿ ನಾನು 3-4 ಲಕ್ಷ ರೂಪಾಯಿ ಸಾಲದಲ್ಲಿದ್ದೇನೆ. ಕಳೆದ ವರ್ಷ ಅಕ್ಟೋಬರ್ನಲ್ಲಿ ನನಗೆ ಅವಳ ಪರಿಚಯ ಆಯಿತು. ಆಕೆ ನನ್ನ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಳು. ಆದರೆ ಇದಕ್ಕೆ ಕಾರಣ ನನಗೆ ತಿಳಿದಿಲ್ಲ. ನಂತರ ಆಕೆ ನನಗೆ ಕರೆ ಮಾಡಿ ಭೇಟಿಯಾಗಬೇಕೆಂದು ಹೇಳುತ್ತಿದ್ದಳು’ ಎಂದು ತೀರ್ಥಾನಂದ್ ವಿಡಿಯೋದಲ್ಲಿ ಹೇಳಿದ್ದಾರೆ.
ಇದಾದ ಬಳಿಕ ಅವರು ವಿಷದ ಬಾಟಲಿ ತೆಗೆದುಕೊಂಡು ಕುಡಿದ್ದಾರೆ. ಆ ಬಳಿಕ ಅವರ ಗೆಳೆಯ ಮನೆಗೆ ಬಂದಿದ್ದು, ಅವರನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಸದ್ಯ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಅಂದಹಾಗೆ ತೀರ್ಥಾನಂದ್ ಈ ರೀತಿ ಅವರು ಆತ್ಮಹತ್ಯೆಗೆ ಪ್ರಯತ್ನಿಸಿರೋದು ಇದೇ ಮೊದಲೇನು ಅಲ್ಲ. 2021ರ ಡಿಸೆಂಬರ್ನಲ್ಲಿಯೂ ಲೈವ್ ಬಂದು ಆತ್ಮಹತ್ಯೆಗೆ ಯತ್ನಿಸಿ ಬದುಕುಳಿದಿದ್ದರು. ಸದ್ಯ ತೀರ್ಥಾನಂದ್ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.